ಹುಬ್ಬಳ್ಳಿ (ಕರ್ನಾಟಕ ವಾರ್ತೆ)ಫೆ.02: ಇಂದು ಹುಬ್ಬಳ್ಳಿ ತಾಲ್ಲೂಕು ಪಂಚಾಯತ್ ನಲ್ಲಿ 2024 ರ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮತದಾನದ ಬಗ್ಗೆ ಯಾವ ರೀತಿ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಚುನಾವಣೆ ನಡೆಯುವ ರೀತಿಯ ಬಗ್ಗೆ ತಾಲೂಕು ಚುನಾವಣಾ ವಿಭಾಗದ ಗೋಪಾಲ ಚಂದನಕರ್ ಮಾಹಿತಿ ನೀಡಿದರು. ಸಭೆಯಲ್ಲಿ ಟಿ.ಎಂ.ಆರ್.ಒ.ಮಹಾಂತೇಶ್ ಕುರ್ತಕೋಟಿ ಹಾಗೂ ತಾಲ್ಲೂಕಿನ ವಿ.ಆರ್.ಡಬ್ಲ್ಯೂ. ಹಾಜರಿದ್ದರು.




