ಬೆಂಗಳೂರು, ಜನವರಿ 01, (ಕರ್ನಾಟಕ ವಾರ್ತೆ):
ಜನವರಿ 04 ರ ಗುರುವಾರ ಸಂಜೆ 4.00 ಗಂಟೆಗೆ ಬೆಂಗಳೂರು (ದಕ್ಷಿಣ) ಜಯನಗರದ ಸಾರಿಗೆ ಅಧಿಕಾರಿಗಳ ಕಚೇರಿಯ 2ನೇ ಮಹಡಿ ಆಡಿಟೋರಿಯಂನಲ್ಲಿ ಸಾರಿಗೆ ಅದಾಲತ್ನ್ನು ಏರ್ಪಡಿಸಲಾಗಿದೆ. ಅದಾಲತ್ನಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಸಾರ್ವಜಿಕರು ಸಾರಿಗೆ ಇಲಾಖೆಗೆ ಸಂಬಂಧಿಸಿದ ಅಹವಾಲು ಮತ್ತು ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸುವ ಮೂಲಕ ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಬೆಂಗಳೂರು (ದಕ್ಷಿಣ) ಜಯನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಎಂ. ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




