ಬೆಂಗಳೂರು, ಮಾರ್ಚ್ 14 (ಕರ್ನಾಟಕ ವಾರ್ತೆ):
ಯುದ್ಧದ ಸನ್ನಿವೇಶದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದ್ದು ಹಾಗೂ ಈ ಕಾರಣದಿಂದಾಗಿ ಪ್ರಯಾಣದ ಅಡಚಣೆ ಎದುರಿಸುತ್ತಿರುವ ಮತ್ತು ಪ್ರಸ್ತುತ ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರು ಯಾವುದೇ ನೆರವಿಗಾಗಿ ಅಥವಾ ವೀಸಾ ಸಂಬAಧಿತ ಸಮಸ್ಯೆಗಳಿಗಾಗಿ ಇಲಾಖೆಯನ್ನು ಸಂಪರ್ಕಿಸಬಹುದು. ಇಂತಹ ಸಂಕಷ್ಟದಲ್ಲಿರುವ ವಿದೇಶಿ ಅತಿಥಿಗಳಿಗೆ ವೀಸಾಗಳ ನಿರ್ವಹಣೆ ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆಯು ಸನ್ನದ್ಧವಾಗಿದೆ,” ಎಂದು ರಾಜ್ಯ ಪ್ರವಾಸೋದ್ಯಮ ಸಚಿವರು ಎಚ್.ಕೆ. ಪಾಟೀಲ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಮಾಹಿತಿಯ ವಿವರಗಳು :
ನಿಮಗೆ ಯಾವುದೇ ಸಹಾಯ ಅಥವಾ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ಮಾರ್ಗಗಳ ಮೂಲಕ ನಮ್ಮನ್ನು ಸಂಪರ್ಕಿಸಿ:
ಕಾರ್ಯನಿರ್ವಹಿಸುವ ಸಮಯ: ಬೆಳಿಗ್ಗೆ 5:30 ರಿಂದ ರಾತ್ರಿ 10:00 ಗಂಟೆಯವರೆಗೆ
ದೂರವಾಣಿ ಸಂಖ್ಯೆ: 89706 50021









