ಬೆಂಗಳೂರು, ಫೆಬ್ರವರಿ 02 (ಕರ್ನಾಟಕ ವಾರ್ತೆ):
ಬೆಂಗಳೂರಿನ ಕೋರಮಂಗಲದ ಕೆಎಸ್ಆರ್ಪಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ಷಿಪ್ 2023-24 ರಲ್ಲಿ ಇಂದು ನಡೆದ ಪಂದ್ಯಾವಳಿಗಳ ರಿಕರ್ವ್ ತಂಡದ ಪುರುಷ ವಿಭಾಗದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಕ್ರೀಡಾಪಟುಗಳಾದ ತುಷಾರ್ ಪ್ರಭಾಕರ್ ಶೆಲ್ಲೆ. ನೀರಜ್ ಚೌಹಾಣ್, ಮುಖೇಶ್ ಬೋರೊ, ಜಿತೇಂದರ್ ಸಿಂಗ್ ರವರು 6 ಪಾಯಿಂಟ್ಗಳನ್ನು ಗಳಿಸಿದರೆ ಸಿಆರ್ಪಿಎಫ್ ತಂಡದ ಬಸಂತ್ ಕುಮಾರ್, ಕಮಲ್ ಸಾಗರ್, ಹೃದಬ್ ತಿರಿಯಾ ಮತ್ತು ವಿನಾಯಕ್ ವರ್ಮ ರವರು 2 ಪಾಯಿಂಟ್ಗಳನ್ನು ಗಳಿಸಿರುತ್ತಾರೆ. ಈ ಹಂತದಲ್ಲಿ ಐಟಿಬಿಪಿ ತಂಡವು ಸಿಆರ್ಪಿಎಫ್ ತಂಡವನ್ನು 4 ಸೆಟ್ ಪಾಯಿಂಟ್ಗಳ ಅಂತರದಲ್ಲಿ ಮಣಿಸಿ. ಚಿನ್ನದ ಪದಕವನ್ನು ಗೆದ್ದಿರುತ್ತಾರೆ.
ಅದೇ ರೀತಿ ರಿಕರ್ವ್ ತಂಡದ ಮಹಿಳಾ ವಿಭಾಗದಲ್ಲಿ ರಾಜಸ್ಥಾನ್ ರಾಜ್ಯದ ಪರವಾಗಿ ಅಮನ್ ದೀಪ್ ಕೌರ್, ಮೀನಾಕುಮಾರಿ ಚತುರ್ವೇದಿ, ನೀರಜ್ ಶರ್ಮ ರವರು, 5 ಸೆಟ್ ಪಾಯಿಂಟ್ಗಳನ್ನು ಪಡೆದರೆ, ಉತ್ತರ ಪ್ರದೇಶ ರಾಜ್ಯದ ಪರವಾಗಿ ಸುಮನ್ ಚೌಧರಿ. ಜೀನತ್ ಆರ್ಯ, ಅನಿತ ಪೌದವಾಲ್, ಶಿಲ್ಪಿ ರವರು 1 ಸೆಟ್ ಪಾಯಿಂಟ್ಗಳನ್ನು ಪಡೆದಿರುತ್ತಾರೆ. ಈ ಹಂತದಲ್ಲಿ ರಾಜಸ್ಥಾನ್ ತಂಡವು 4 ಸೆಟ್ ಪಾಯಿಂಟ್ಗಳ ಅಂತರದಲ್ಲಿ ಮಣಿಸಿ, ಚಿನ್ನದ ಪದಕವನ್ನು ಗೆದ್ದಿರುತ್ತಾರೆ.
ಇಂದು ನಡೆದ ಇಂಡಿಯನ್ ವಿಭಾಗದ ವೈಯಕ್ತಿಕ ಒಲಿಂಪಿಕ್ ಪಂದ್ಯಾವಳಿಯ ಪುರುಷ ವಿಭಾಗದಲ್ಲಿ ಪಿ ಹೆರೋಬಾ ಸಿಂಗ್ – ಚಿನ್ನ, ವಿಕಾಸ್ ಹರಿದಾಸ್ ಮೋರೆ – ಬೆಳ್ಳಿ ಮತ್ತು ಗೌರವ್ ಸಂಜಯ್ ರಾವ್ ಚಂಡ್ನೆ-ಕಂಚು ಪಡೆದಿದ್ದಾರೆ. ಇದೇ ವಿಭಾಗದ ಮಹಿಳಾ ಪಂದ್ಯಾವಳಿಯಲ್ಲಿ ಬೇಬಿ ದೇವಿ – ಚಿನ್ನ, ಟುಟುಮೋನಿ ಬೋರೊ – ಬೆಳ್ಳಿ ಮತ್ತು ಪಲ್ಲಬಿ ಬೋರೊ – ಕಂಚಿನ ಪದಕ ಗೆದ್ದಿರುತ್ತಾರೆ.
ಕರ್ನಾಟಕ ಲೋಕಾಯುಕ್ತದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು ಪದಕ ವಿಜೇತರಿಗೆ ಪದಕಗಳನ್ನು ಪ್ರದಾನ ಮಾಡಿ, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಕೋರಿದರು.




