ಹುಬ್ಬಳ್ಳಿ – 11 – ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ಶ್ರೀ ನಂದನ ಸಂಗೀತ ವಿದ್ಯಾಲಯದ ವಿದುಷಿ ಶ್ರೀಮತಿ ನಿಶಾ ಭಟ್ ಅವರ ನೇತೃತ್ವದಲ್ಲಿ ವಿಶೇಷ ಭಜನೆ ನಡೆಯಿತು. ಇವರೊಂದಿಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.. ಸುಮಾರು ಒಂದೂವರೆ ತಾಸುಗಳ ಕಾಲ ನಡೆದ ಈ ಭಜನೆಯಲ್ಲಿ ದೇವಿಯ, ಶ್ರೀರಾಮ ನ, ಶ್ರೀಕೃಷ್ಣ ನ ವಿವಿಧ ಭಜನೆಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು.