ಹುಬ್ಬಳ್ಳಿ (ಕರ್ನಾಟಕವಾತೆ) ಡಿ.22 : ದಿವಂಗತ ಬಿ. ಬಸವಲಿಂಗಪ್ಪನವರ ಪುಣ್ಯತಿಥಿಯ ಅಂಗವಾಗಿ ಡಿಸೆಂಬರ್ 27 ರಂದು ಬೆಳಿಗ್ಗೆ 10.30 ಗಂಟೆಗೆ ರಾಷ್ಟಪಿತ ಮಹಾತ್ಮ ಗಾಂಧಿಜೀ ಉದ್ಯಾನವನ (ಇಂದಿರಾಗಾಜಿನ ಮನೆ) ಹುಬ್ಬಳ್ಳಿ ಆವರಣದಲ್ಲಿರುವ ದಿವಂಗತ ಬಿ.ಬಸವಲಿಂಗಪ್ಪನವರ ಪ್ರತಿಮೆಗೆ ಮಹಾನಗರ ಪಾಲಿಕೆ ಮಹಾಪೌರರಿಂದ ಮಾಲಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಸಿ.ಬೇವೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.