ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.20: ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ನಿರ್ದೇಶನದ ಮೇರೆಗೆ ನವೆಂಬರ್ 20 ರಿಂದ 24 ರವರೆಗೆ ಆಡಿಟ್ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.
ನೈರುತ್ಯ ರೈಲ್ವೆಯ ಆಡಿಟ್ ಜನರಲ್ ಕಚೇರಿಯಿಂದ ಆಡಿಟ್ ಜಾಗೃತಿ ಸಪ್ತಾಹವನ್ನು ನವೆಂಬರ್ 22 ರಂದು ಬೆಳಿಗ್ಗೆ 9.30 ಗಂಟೆಗೆ ನೈರುತ್ಯ ರೈಲ್ವೆಯ ವಿಭಾಗೀಯ ಲೆಕ್ಕ ಪರಿಶೋಧನಾ ಕಚೇರಿಯ ಹಳೆಯ ಜನರಲ್ ಮ್ಯಾನೇಜರ್ ಕಚೇರಿ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಹಿರಿಯ ಲೆಕ್ಕ ಪರಿಶೋಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.