ಹುಬ್ಬಳ್ಳಿ – 17 – ಸುನದಾ ಗಾನಸುಧಾ ವತಿಯಿಂದ 18-11-2023 ರ ಶನಿವಾರ ಸಂಜೆ 6:00 ಗಂಟೆಗೆ ರಾಮಕೃಷ್ಣ ವಿವೇಕಾನಂದ ಆಶ್ರಮ, 3ನೇ ಮುಖ್ಯ, 5ನೇ ಅಡ್ಡ ರಸ್ತೆ, ಕಲ್ಯಾಣ ನಗರ, ಹುಬ್ಬಳ್ಳಿಯಲ್ಲಿ ವಿದ್ವಾನ್ ರಾಕೇಶ ದತ್ ಅವರಿಂದ ಕೊಳಲು ವಾದನ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇವರೊಂದಿಗೆ ವಿದ್ವಾನ್ ನಾಗೇಂದ್ರ ಪ್ರಸಾದ ಮೃದಂಗ ಸಾಥ ವಿದ್ವಾನ್ ಕಾರ್ತಿಕ ಕೌಶಿಕ ಪಿಟೀಲು ಸಾಥ್ ನೀಡಲಿದ್ದಾರೆ. ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ರಘುವೀರಾನಂದಜಿ ಮಹಾರಾಜ್, ಗಾನಸುಧ ಸಂಸ್ಥೆಯ ಅಧ್ಯಕ್ಷ ಶಿವಪ್ರಸಾದ ಬೇಕಲ್, ಕಾರ್ಯದರ್ಶಿ ಲತಾ ಜಮಖಂಡಿ ಉಪಸ್ಥಿತ ಇರುವರೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರಲ್ಲಿ ಒಬ್ಬರಾದ ಡಾ. ನಾಗಲಿಂಗ ಮುರಗಿ ವಿನಂತಿಸಿದ್ದಾರೆ.